ಕಸದ ವಿಲೇವಾರಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ!

Jagruthi Times Kannada
0


ಮಹದೇವಪುರ ಕ್ಷೇತ್ರದ ಶೆಟ್ಟಿ ಲೇಔಟ್ ಗರ್ಡೆಚಾರ್ ಪಾಳ್ಯದಲ್ಲಿ ಕಸದ ವಿಲೇವಾರಿಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಸ್ಥಳೀಯ ನಿವಾಸಿಗಳ ದೂರಿನಂತೆ, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಸದ ಸಂಗ್ರಹಣೆಯ ಹೊಣೆ ಹೊತ್ತಿರುವ ವಾಹನಗಳು ಸರಿಯಾದ ವೇಳೆಗೆ ಬರುವುದಿಲ್ಲ, ಇದರಿಂದ ಕಸದ ರಾಶಿಗಳು ಬೀದಿಗಳಲ್ಲಿ ಗುಡ್ಡದಂತೆ ಕಾಣಿಸುತ್ತಿವೆ.

ಸಂಜೆಯ ಹೊತ್ತಿಗೆ ದುರ್ವಾಸನೆ ಹೆಚ್ಚಾಗಿ ಜನರು ತೀವ್ರವಾಗಿ ಬೇಸತ್ತು ಹೋಗುತ್ತಿದ್ದಾರೆ. ಸ್ವಚ್ಛತೆಯ ಕೊರತೆಯಿಂದ ಆರೋಗ್ಯಕ್ಕೆ ಅಪಾಯ ಸೃಷ್ಟಿಯಾಗುವ ಭೀತಿ ಮೂಡಿದೆ. ಪ್ರತಿದಿನವೂ ಕಸದ ಸಮಸ್ಯೆಗೆ ತುತ್ತಾಗುತ್ತಿರುವ ಜನತೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುತ್ತದಾ? ಬಿಬಿಎಂಪಿ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಬರುತ್ತದಾ? 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!